ನನಗೆ ಕೊಲಾಜ್ ದಿನಗಳಲ್ಲಿ ಆಗುಂಬೆ ಘಾಟಿ ಹತ್ತಬೇಕೆಂಬ ಅಸೆ ಅದಕ್ಕಾಗಿ ನನ್ನ ಗೆಳೆಯರಿಗೆ ತುಂಬಾ ಸಾರಿ ಬೈಕ್ ಸಾಲವಾಗಿ ಕೇಳಿದ್ದೆ ಆದರೆ ನನ್ನ ಅಸೆ ನೆರವೇರಿದ್ದು ವರ್ಷ ೧೯೯೪.ನಾನು ಆಯ್ದುಕೊಂಡ ದಾರಿ ಉಡುಪಿ- ಮಣಿಪಾಲ – ಹಿರಯಾದ್ಕ – ಹೆಬ್ರಿ – ಆಗುಂಬೆ. ವರ್ಷ ೧೯೯೪ ನನ್ನ ಬಳಿ M – 80 ಬಜಾಜ್ ಮೋಟೊರ್ ಬೈಕ್ ಇತ್ತು ಉಡುಪಿಯಲ್ಲಿ ಪೆಟ್ರೋಲ್ ತುಂಬಿಸಿ ಒಬ್ಬಂಟಿಯಾಗಿ ಬೈಕ್ ಹತ್ತಿದೆ. ಬೈಕ್ ತನ್ನ ವೇಗದಲ್ಲಿ ನನ್ನ ಆಸೆಯನ್ನು ನೆರವೇರಿಸಲು ಮುಂದುವರೆಯುತ್ತಿತ್ತು
ವರಂಗ ವರಂಗ ಜೈನರ ಪವಿತ್ರ ಯಾತ್ರಾ ಸ್ತಳ ಇದು ಮೂರು ಹಳೆ ಜೈನ ಬಸದಿ ಇರುವ ಸ್ತಳ .ಚಂದ್ರನಾಥ್ ಬಸದಿ , ನೆಮಿನಾಥ್ ಬಸದಿ ಇವೆರಡು ಕೆರೆಯ ದಡದಲ್ಲಿ ಇದೆ ಹಾಗು ಕೆರೆ ಬಸದಿ ‘ಚತುರ್ಮುಖ ಬಸದಿ ಕೆರೆಯ ಮದ್ಯ ಭಾಗದಲ್ಲಿ ಇದೆ ಈ ಬಸದಿಗಳು ನಾಲ್ಕು ಜೈನ ತಿರ್ಥನ್ಕರರಿಗೆ ಕಟ್ಟಲಾಗಿದೆ ಪಾರ್ಶ್ವನಾಥ್ , ನೆಮಿನಾಥ್ , ಅನಂಥ್ನಾಥ್ ಮತ್ತು ಶಾಂತಿನಾಥ್ . ಕೆರೆ ಬಸದಿ ಹದಿನೆಂಟನೆ ಶತಮಾನದಲ್ಲಿ ಕಟ್ಟಲಾಗಿದೆ ವರಂಗ ಕಾರ್ಕಳದಿಂದ 25 KMs ದೂರದಲ್ಲಿದ್ದು ಕಾರ್ಕಳ – ಹೆಬ್ರಿ ರೋಡ್ ನಲ್ಲಿದೆ (ಹೆಬ್ರಿಯಿಂದ 9KMs ).ಬೆಂಗಳುರಿನಿಂದ ಸುಮಾರು 385KMs ಹಾಗು ಮಂಗಳೂರಿನಿಂದ 90 KMs ದೂರದಲ್ಲಿದೆ
ಸಂಸೆಟ್ಟ ಪಾಯಿಂಟ್ ಆಗುಂಬೆಯ ಅತ್ಯಂತ ಜನಪ್ರಿಯ ತಾಣ ಕನ್ನ್ನಡದ ವರ ನಟ Dr ರಾಜಕುಮಾರ್ ತನ್ನ ಆಕಸ್ಮಿಕ ಸಿನಿಮಾದಲ್ಲಿ ಆಗುಂಬೆಯ ಸುಂದರವಾದ ಸೂರ್ಯಾಸ್ತಮಾನದ ದ್ರಶ್ಯ ತುಂಬಾ ಸುಂದರವಾಗಿ “ಆಗುಂಬೆಯ ಪ್ರೀಮ ಸಂಜೆಯ ” ಹಾಡಿನಮೂಲಕ ತೋರಿಸಿದ್ದಾರೆ ಈ ಸಂಸೆಟ್ಟ ಪಾಯಿಂಟ್ ಘಾಟಿಯ ಹದಿನಾಲ್ಕನೇ ತಿರುವಿನಲ್ಲಿ ಇದೆ.
ಆಗುಂಬೆ ಎಂದರೆ ನಮಗೆಲ್ಲ ನೆನಪಿಗೆ ಬರುವುದು ಮಾಲ್ಗುಡಿ ಡೇಸ್ ಜನಪ್ರಿಯ ಟಿವಿ ಧಾರಾವಾಹಿ ಮಾಲ್ಗುಡಿ ಡೇಸ್ ಪೂರ್ತಿಯಾಗಿ ಆಗುಂಬೆಯ ಪರಿಸರಸಲಿ ಶಂಕರ ನಾಗ್ ತೆಗೆದಿರುತ್ತಾರೆ ಇವತ್ತಿಗೂ ಮಾಲ್ಗುಡಿ ಡೇಸ್ ನಮ್ಮ ಮನಸಿನ್ನಲ್ಲಿ ನಿಲ್ಲಲು ಒಂದು ಕಾರಣ ಆಗುಂಬೆ ಎಂದಲ್ಲಿ ತಪ್ಪಲ್ಲ..